ಯಜ್ಞದ ಕುರಿಯಾದಾತನು
ನಮ್ಮ ಕನ್ನಡ ಬೈಬಲ್ ಸ್ಟಡಿ / ಕನ್ನಡ ಬೈಬಲ್ ಅಧ್ಯಯನ “ ವೆಬ್ಸೈಟ್ ಗೆ ಭೇಟಿ ನೀಡಿ ಸಂದೇಶಗಳನ್ನು ಓದುತ್ತಿರುವ ಎಲ್ಲ ಪ್ರಿಯ ದೇವಜನರಿಗೂ ಕರ್ತನಾದ ಯೇಸು ಕ್ರಿಸ್ತನ ನಾಮದಲ್ಲಿ ವಂದನೆಗಳು
ಪ್ರಿಯರೆ ನಾವಾದರೋ ನಮ್ಮ ರಕ್ಷಕನೂ , ಯಜ್ಞದ ಕುರಿಯಾದಾತನೂ ಆದ ಯೇಸು ಕ್ರಿಸ್ತನ ರಕ್ಷಣೆಯ ಆನಂದವನ್ನು ಅನುಭವಿಸುತ್ತ ಆತನ ಎರಡನೇ ಬರೋಣಕ್ಕಾಗಿ ಕಾಯುತ್ತಿದ್ದೇವೆ . ಆದರೆ ಆತನಲ್ಲಿ ನಂಬಿಕೆಯಿಡದ ಅನೇಕ ಅನ್ಯಜನರು ಯಜ್ಞದ ಕುರಿಯಾದಾತನ ಮಹಿಮೆಯನ್ನು ಅರಿಯದೆ ನರಕಪಾತ್ರರಾಗುತ್ತಿದ್ದಾರೆ . ಅಂಥವರೆಲ್ಲ ಯಜ್ಞದ ಕುರಿಯಾದಾತನ ಬಗ್ಗೆ ತಿಳಿಯುವುದು ಅತ್ಯವಶ್ಯವಾಗಿದೆ.
👉 ಯಾರು ಆ ಯಜ್ಞದ ಕುರಿಯಾದಾತನು ?
ಆದಿಕಾಂಡ :22:7: ರಲ್ಲಿ “ಹೋಮಕ್ಕೆ ಬೇಕಾದ ಕುರಿ ಎಲ್ಲಿ ? … ಎಂಬ ಯೇಸು ಕ್ರಿಸ್ತನ ಮುನ್ಸೂಚನೆಯಾಗಿ ಕೇಳಲ್ಪಟ್ಟ ಪ್ರಶ್ನೆಗೆ ಸ್ನಾನಿಕನಾದ ಯೋಹಾನನು ತನ್ನ ಸುವಾರ್ತೆ ಪುಸ್ತಕವಾದ ಯೋಹಾನ : 1:29 ರಲ್ಲಿ ಯೇಸು ಕ್ರಿಸ್ತನನ್ನು ನೋಡಿ - “ ಅಗೋ ಯಜ್ಞಕ್ಕೆ ದೇವರು ನೇಮಿಸಿದ ಕುರಿ, ಲೋಕದ ಪಾಪವನ್ನು ನಿವಾರಣೆ ಮಾಡುವವವನು “ ಎಂದು ಹೇಳಿದನು . ಯಾಕಂದರೆ ಯೇಸು ಕ್ರಿಸ್ತನು ಬರುವದಕ್ಕಿಂತ ಮುಂಚೆ ಇಸ್ರಾಯೇಲ್ಯರು ತಮ್ಮ ಪಾಪಗಳ ಪರಿಹಾರಕ್ಕಾಗಿ ಎಂದಿಗೂ ಪಾಪ ನಿವಾರಣೆ ಮಾಡಲಾರದಂಥ ಒಂದೇ ವಿಧವಾದ ಯಜ್ಞಗಳನ್ನು ಪದೇ ಪದೇ ಸಮರ್ಪಿಸುತ್ತಿದ್ದರು .(ಇಬ್ರಿಯ :10:11-12) . ಆದರೆ ತಂದೆಯಾದ ದೇವರಿಂದ ನೇಮಿಸಲ್ಪಟ್ಟ ಯಜ್ಞದ ಕುರಿ ಯೇಸು ಕ್ರಿಸ್ತನು ತನ್ನನ್ನು ತಾನೇ ಬರಿದು ಮಾಡಿಕೊಂಡು ಎಲ್ಲ ಕಾಲಕ್ಕೂ ನಿಲ್ಲುವ ಒಂದೇ ಯಜ್ಞವಾಗಿ ಸ್ವಂತ ರಕ್ತವನ್ನೇ ಸಮರ್ಪಿಸಿ ಎಲ್ಲಾ ಮನುಷ್ಯರಿಗಾಗಿ ನಿತ್ಯ ವಿಮೋಚನೆಯನ್ನು ಸಂಪಾದಿಸಿಕೊಂಡನು .
👉 ಯಜ್ಞದ ಕುರಿಯಾದ ಯೇಸು ಕ್ರಿಸ್ತನು ಲೋಕಕ್ಕೆ ಏಕೆ ಬಂದನು ?
1) ಸ್ವರ್ಗದ ಮಾರ್ಗವನ್ನು ನಮಗೆ ತೋರಿಸಲು (ಯೋಹಾನ 14:6)
2) ಸೈತಾನನು ಎಂಬ ವೈರಿಯಿಂದ ನಮ್ಮನ್ನು ಬಿಡಿಸಲು (ಇಬ್ರಿಯ 2:14):
3) ಪಾಪವೆಂಬ ಸೆರೆಮನೆಯಿಂದ ನಮ್ಮನ್ನು ಬಿಡಿಸಲು (ಇಬ್ರಿಯ 2:15)
4) ನಮ್ಮ ಬಲಹೀನತೆಯಲ್ಲಿ ನಮಗೆ ಸಹಾಯ ಮಾಡಲು(ಇಬ್ರಿಯ : 2:16-18).
5) ನಮ್ಮನ್ನು ನಮ್ಮ ಪಾಪಗಳಿಂದ ಬಿಡಿಸಲು ಬಂದನು (ಯೋಹಾ
1:29)
6) ನಮಗೆ ನಿತ್ಯಜೀವವನ್ನು ಕೊಡಲು ಬಂದನು (ಯೋಹಾನ:3:16)
👉 ಯಜ್ಞದ ಕುರಿಯಾದ ಯೇಸು ಕ್ರಿಸ್ತನು ಲೋಕಕ್ಕೆ ಬಂದು ಏನು ಮಾಡಿದನು ?
ಪ್ರಿಯ ಓದುಗರೇ ನಮಗಾಗಿ ಅಗೋಚರ ಬೆಳಕಿನಲ್ಲಿ ವಾಸಮಾಡುತ್ತಿದ್ದ ರಕ್ಷಕನು ಧೂಳಿಗೆ ಸಮಾನರಾದ ಮನುಷ್ಯರ ಲೋಕದಲ್ಲಿ ಜೀವಿಸುತ್ತ ಅವರ ಕಷ್ಟಗಳಿಗೆ ಸ್ಪಂದಿಸಿ , ರೋಗದಲ್ಲಿ ಬಿದ್ದವರನ್ನು ಗುಣಪಡಿಸಿದನು, ಜನರು ಕಳಕೊಂಡಿದ್ದ ತಮ್ಮ ಸತ್ತವರನ್ನು ಜೀವಂತವಾಗಿ ಎಬ್ಬಿಸಿದನು , ಹಸಿದವರ ಹಸಿವೆಯನ್ನು ನೀಗಿಸಿದನು, ಅನೇಕ ದೈವಿಕ ಸತ್ಯಾರ್ಥಗಳನ್ನು ಜನರಿಗೆ ಬೋಧಿಸಿದನು , ಪರಲೋಕದ ಗೂಡಾರ್ಥಗಳನ್ನು ಬಿಡಿಸಿ ಹೇಳಿದನು , ಕಟ್ಟ ಕಡೆಗೆ ಅದೇ ಜನರಿಗಾಗಿ ತನ್ನ ಪ್ರಾಣವನ್ನೇ ಕೊಟ್ಟನು .
✔ ನಾವು ಯಜ್ಞದ ಕುರಿಯಾದಾತನ ಬಗ್ಗೆ ಏಕೆ ತಿಳಿಯಬೇಕು ?
👉 ಯಜ್ಞದ ಕುರಿಯಾದಾತನೂ ಆತನ ಭಕ್ತರಿಗೆ/ವಿಶ್ವಾಸಿಗಳಿಗೆ ಏನಾಗಿದ್ದಾನೆ ?
✔ ಯಜ್ಞದ ಕುರಿಯಾದ ಯೇಸು ಕ್ರಿಸ್ತನು
🌟 ಆತನ ವಿಶ್ವಾಸಿಗಳಿಗೆ ಕುರುಬನಾಗಿರುವನು (ಪ್ರಕಟಣೆ :7:17),
🌟 ಅವರು ಆತನ ರಕ್ತದ ಬಲದಿಂದಲೂ ವಾಕ್ಯದ ಬಲದಿಂದಲೂ ಸೈತಾನನನ್ನು ಜಯಿಸುವರು (ಪ್ರಕಟಣೆ :12:11),
🌟 ಕರ್ತಾದಿ ಕರ್ತನು ರಾಜಾದಿ ರಾಜನು ಆಗಿರುವ ಯಜ್ಞದ ಕುರಿಯಾದಾತನ ಜಯದಲ್ಲಿ ಆತನ ಮಕ್ಕಳೆಲ್ಲರೂ ಪಾಲುಗಾರರಾಗುವರು (ಪ್ರಕಟಣೆ :17:14),
🌟 ಆತನಿಂದ ನಿತ್ಯಜೀವವನ್ನು ಹೊಂದಿದವರೆಲ್ಲರೂ ಆತನೊಂದಿಗೆ ಜೀವಿಸುತ್ತಾ ಯುಗಯುಗಾಂತರಗಳಲ್ಲಿಯೂ ಆಳುವರು . (ಪ್ರಕ:22:5).
👉 ಯಜ್ಞದ ಕುರಿಯಾದಾತನೂ ಆತನ ತಿರಸ್ಕರಿಸಿದ / ನಂಬಿಕೆಯಿಡದ ಜನರಿಗೆ ಏನಾಗಿದ್ದಾನೆ ?
ಕೊನೆಯದಾಗಿ ಆತನನ್ನು ನಂಬದೆ ಇರುವ ಎಲ್ಲಾ ಜನರು ಯಜ್ಞದ ಕುರಿಯಾದಾತನ ಅಂದರೆ ಯೇಸು ಕ್ರಿಸ್ತನ ಮುಂದೆ ಹಾಗೂ ಪರಲೋಕದ ದೇವದೂತರ ಮುಂದೆ ಬೆಂಕಿಯಿಂದಲೂ ಗಂಧಕದಿಂದಲೂ ಉರಿಯುವ ನರಕದಲ್ಲಿ ಹಾಕಲ್ಪಟ್ಟು ನಿತ್ಯಕಾಲಕ್ಕೂ ಯಾತನೆ ಪಡುವರು . (ಪ್ರಕ:14;10). ಅವರ ಯಾತನೆಗೆ , ಅವರು ಪಡುವ ನರಳಾಟಕ್ಕೆ ನೋವಿಗೆ ಅಲ್ಲಿ ಅಂತ್ಯವೇ ಇರುವುದಿಲ್ಲ .
ಪ್ರಿಯ ಓದುಗರೇ , ಆಲೋಚಿಸಿರಿ !!!!!!! ನಿಮ್ಮ ಶಾಶ್ವತ ಸ್ಥಳ ಯಜ್ಞದ ಕುರಿಯಾದ ಯೇಸುಕ್ರಿಸ್ತನು ಇರುವ ಸ್ವರ್ಗವೋ ? ಅಥವಾ ನಿತ್ಯಕಾಲಕ್ಕೂ ಸಂಕಟ ಪಡುವ ಸ್ಥಳ ನರಕವೋ ?
ಈ ಹೊತ್ತೇ ನಿರ್ಧರಿಸಿ … ಯೇಸು ಕ್ರಿಸ್ತನು ನಿಮ್ಮ ಹೃದಯಗಳನ್ನು ತೆರೆಯಲಿ ..
By - Bro Prabhu
0 ಕಾಮೆಂಟ್ಗಳು